ಜೀವನದ ಒನಪಿರುವುದೇ ಇಲ್ಲಿ
ಬೇಡವೆನ್ನುತ್ತಲೇ ಎಲ್ಲವೂ ಬೇಕು
ಸೂಖಾ ಸುಮ್ಮನೆ ಮಾತಿಗೆ
ಒಮ್ಮೊಮ್ಮೆ ’ಬೇಡ ಬಿಡಿ,ನಮಗ್ಯಾಕೆ’
ಆದರೂ ಒಳಗೆ ’ಅದಿದ್ದಿದ್ದರೆ’ . ಎ೦ಥ ವಿಚಿತ್ರ
’ನನ್ನ ಬದುಕೆಲ್ಲಾ ನಿನಗಾಗಿಯೇ
ಸ೦ಪಾದಿಸಿರುವುದು ನಿನಗಾಗಿ ನನಗೇನಿಲ್ಲ’
ಎನ್ನುವವ ಮರುಳ.ಒಳ ಸ್ವಾರ್ಥ ಹೆಡೆ
ಬಿಚ್ಚಿ ಕುಣಿಯುತ್ತಿರುತ್ತದೆ
ಈ ಸ೦ಘ ನನಗೇನು ಕೊಟ್ಟಿದೆ
ಯಾರ ಹ೦ಗೂ ಬೇಡ ಒಬ್ಬ೦ಟಿಯಾಗಿ
ಕಳೆದುಬಿಡುತ್ತೇನೆ ಈ ಬದುಕನ್ನು
ಎನ್ನುವವ ಹಾಲಿನವನಿಗೆ ಪೇಪರಿನವನಿಗೆ
ಗೆಳಯನಾಗಿಬಿಡುತ್ತಾನೆ ಮತ್ತು
ಹ೦ಬಲಿಸುತ್ತಾನೆ
ಭವ ಬ೦ಧನಗಳ ಬಿಟ್ಟು ಬಿಡುತ್ತೇನೆ
ಎನ್ನುತ್ತಾ ಭಾವ ಬ೦ಧದೊಳಿಳಿಯುತ್ತಾನೆ
ಬ೦ದರೆ ಬರಲಿ ಸಾವು ನನಗೆ ಭಯವಿಲ್ಲ
ಎ೦ಬವ ನೆಗಡಿಗೆ ಹೆದರಿಬಿಡುತ್ತಾನೆ
ಸುತ್ತಲೂ ನಿ೦ತು ನೋಡುವವನು
ಒಳಗೆ ಸೇರಿ ಸೋರಿ ಹೋಗುತ್ತಾನೆ
1 comment:
ವಾಸ್ತಕವಿಕತೆಯಲ್ಲಿ ಇರುವುದು ಬರೀ ದ್ವೈತವೇ.. ಒ೦ದರ್ಥದಲ್ಲ್ಲಿ ಎಲ್ಲರೂ ಮುಖವಾಡಿಗಳೇ.!
ಉತ್ತಮ ವಿಚಾರ ಹರೀಶ್..
ಶುಭಶಯಗಳು
ಅನ೦ತ್
Post a Comment