೧
ಪಾದದಡಿಯ ಮಣ್ಣು ಕುಸಿಯುತಿದೆ
೨
ವಾಮನರೇ ಎಲ್ಲ, ಒ೦ದು ಕಾಲು ಮೇಲೆ
ಇನ್ನೊ೦ದು ಕಾಲು ಭೂಮಿಯೊಳಗೆ
೩
ಮಣ್ಣ ಮೂರ್ತಿ, ಕಣ್ಣು ಹೊಡೆದು
ನಮ್ಮೆದುರು ನಿ೦ತಿದೆ, ಕತೃಗಳು ನಾವೇ
ನಿಜ ದೇಹ ಅವಿತು ಕೇಕೆ ಹಾಕುತ್ತದೆ
೪
ಅಸ್ತಿತ್ವ, ವ್ಯಕ್ತಿತ್ವ, ಸತ್ತು ಒಳಗೇ ಕೊಳೆತು ನಾತ.
ಪ್ರಶ್ನೆಗಳಿಲ್ಲದ ಬದುಕು ಬದುಕೇ?
ಕೆಸರವಿಗ್ರಹಕ್ಕೆ ಪೂಜೆ. ಅಸಹ್ಯ!
ಕೇಳುವುದೆ೦ದರೆ ನಮಗೆ ಅಪಥ್ಯ
No comments:
Post a Comment