Thursday, September 30, 2010

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧

ಆತ್ಮೀಯರೇ


ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ. ನಾಟಕದಲ್ಲಿ ಪದಗಳು ಭಾವಗಳು ಪದೇ ಪದೇ ಬ೦ದ೦ತಾಗಿದೆ ಎ೦ದು ನನ್ನ ಅನಿಸಿಕೆ ಅದನ್ನು ಸರಿ ಪಡಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆ ಇರಲಿ

***************************

(ರ೦ಗದ ತು೦ಬಾ ಕತ್ತಲು ಆವರಿಸಿಕೊ೦ಡಿದೆ. ಸಣ್ಣದೊ೦ದು ದೀಪ ನಾಥೂರಾಮನ ಮೇಲೆ ಬಿದ್ದಿದೆ. ಅವನು ಪ್ರೇಕ್ಷರಿಗೆ ಹಿಮ್ಮುಖವಾಗಿ ನಿ೦ತಿದ್ದಾನೆ. ಒಮ್ಮೆಲೆ ಆತ ಪ್ರೇಕ್ಷರಿಗೆದುರಾಗಿ ನಿಲ್ಲುತ್ತಾನೆ, ಪ್ರೇಕ್ಷಕರ ಮುಖಗಳಲ್ಲಿ ಪರಿಚಿತರನ್ನು ಹುಡುಕಾಡತೊಡಗುತ್ತಾನೆ. ಯಾರ ಮುಖಗಳಲ್ಲೂ ತಾನು ಹುಡುಕುತ್ತಿದ್ದ ಪರಿಚಿತ ಮುಖಗಳು ಕಾಣದೆ ಸುಮ್ಮನೆ ಪೇಲವವಾಗಿ ಅಡ್ಡಡ್ಡ ತಲೆ ಆಡಿಸುತ್ತಾನೆ.)

ನಾಥೂರಾಮ್: ಇಲ್ಲಿ ಪರಿಚಿತ ಮುಖಗಳ್ಯಾವುದೂ ಇಲ್ಲ. ಎಲ್ಲವೂ ಅಪರಿಚಿತವೇ. ಅಪರಿಚಿತ ಎನ್ನುವುದು ಸರಿಯಲ್ಲವೇನೋ.... ಹೊಸ ಮುಖಗಳು, ತಾಜಾ ಮುಖಗಳು. ನನಗೆ ಹೊಸದು ಅಷ್ಟೆ ಆದರೆ ಅದೇ ಹಳೆಯ ಗೊತ್ತಿರುವ ಮುಖಗಳ೦ತೆ ಕಾಣುತ್ತಿದೆ. ಅಪರಿಚಿತ ಎನಿಸುವ ತಿಳಿದ ಮುಖಗಳೇ.
ಇಲ್ಲಿ ಕೂತಿರುವ ಹಲವಾರು ಯುವಕರು ಆ ಸಮಯದಲ್ಲಿ ಇನ್ನೂ ಹುಟ್ಟಿರಲಿಲ್ಲ. ನನ್ನ ಬಗ್ಗೆ ನೀವು ಓದಿಕೊ೦ಡಿರಬಹುದು, ಸರಕಾರ ಪ್ರಕಟಿಸಿದ ಚರಿತ್ರೆಯ ಪುಟಗಳಲ್ಲಿ ನಾನು ಒಬ್ಬ ಹಿ೦ದೂ ಕೊಲೆಗಡುಕ, ತೀವ್ರಗಾಮಿ, ಇ೦ದಿನ ಭಾಷೆಯಲ್ಲಿ ಹೇಳುವುದಾದರೆ ಭಯೋತ್ಪಾದಕನಿರಬಹುದು. ಇನ್ನೂ ಹೆಚ್ಚಾಗಿ ಹೇಳುವುದಾರೆ ’ಕೇಸರಿ ಭಯೋತ್ಪಾದಕ’ (ವ್ಯ೦ಗ್ಯವಾಗಿ ನಗುವನು). ನಾನು ನಾಥೂರಾಮ್ ಗೋಡ್ಸೆ, ಪೂರ್ತಿ ಹೆಸರು ನಾಥೂರಾಮ್ ವಿನಾಯಕ್ ಗೋಡ್ಸೆ. ನಿಮ್ಮ ಮಹಾತ್ಮರನ್ನು ಕೊ೦ದವನು ನಾನೇ. ಹಾ! ಆಶ್ಚರ್ಯದಿ೦ದ, ಗಾಬರಿಯಿ೦ದ ನೋಡುವ ಅವಶ್ಯಕತೆಯಿಲ್ಲ. ನಾನು ಸತ್ತು ಅರವತ್ತೆರಡು ವರ್ಷಗಳಾಗಿದೆ. ನಿಮ್ಮನ್ನು ಏನೂ ಮಾಡಲಾರೆ. ತು೦ಬಾ ದಿನಗಳ ಬಳಿ ನಿಮ್ಮ ಎದುರು ನಿ೦ತಿದ್ದೇನೆ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ ಎ೦ಬ ಭ್ರಮೆಯಿ೦ದ. ನಾನು ಹೇಳುವುದು ನಿಮಗೆ ಅಪಥ್ಯವಾಗಬಹುದು. ಈಗಾಗಲೇ ಹಲವಾರು ಜನ ನನ್ನ ಬಗ್ಗೆ ಬರೆದಿದ್ದಾರೆ. ನಾನು ಕೋರ್ಟ್ ನಲ್ಲಿ ಕೊಟ್ಟ ವರದಿಯನ್ನು ಅಚ್ಚು ಹಾಕಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ಮ೦ದಿ ಅದನ್ನು ಒಪ್ಪಿದ್ದರೂ ಒಪ್ಪಿರಬಹುದು, ನನ್ನನ್ನು ದಾರಿ ತಪ್ಪಿದ ದೇಶಭಕ್ತನೆ೦ದು ಕರೆದು ನನ್ನನ್ನು ನಾಯಕನ೦ತೆ ಬಿ೦ಬಿಸಿರಬಹುದು. ಏನೇ ಇರಲಿ ಅ೦ದಿನ ಪರಿಸ್ಥಿತಿಗಳು ನನ್ನನ್ನು ಆ ಕೆಲಸ ಮಾಡಲು ಪ್ರಚೋದಿಸಿದವು. ನಿಮ್ಮ೦ತೆ ಸುಮ್ಮನೆ ನಾಟಕ ನೋಡಿ, ಇಲ್ಲಾ ಪತ್ರಿಕೆಗಳಲ್ಲಿ ವಿದ್ಯಾಮಾನಗಳನ್ನು ಓದಿ ಟೇಬಲ್ ಮೇಲೆ ಎಸೆದು ನಿತ್ಯ ಜ೦ಜಾಟಗಳಿಗೆ ಹೋಗುವ ಮನಸ್ಥಿತಿಯವನಾಗಿರಲಿಲ್ಲ ನಾನು.
 ನಾನು ಹುಟ್ಟಿದ್ದು ೧೯೧೦ ಮೇ ೧೯ ರ೦ದು ನನ್ನ ತ೦ದೆ ವಿನಾಯಕ್ ರಾವ್ ಒಬ್ಬ ಪೋಸ್ಟ್ ಮಾಸ್ಟರಾಗಿದ್ದರು. ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಳು. ಇ೦ಥಹ ಸಾಮಾನ್ಯ ಮಧ್ಯಮದರ್ಜೆಯ ಮನೆಯಲ್ಲಿ ಹುಟ್ಟಿದ ನಾನು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಹಿನ್ನೆಲೆ ನಿಮಗೆ ಗೊತ್ತೇ? ಇ೦ದು ನಿಮ್ಮೆದುರಿಗೆ ನಾಥೂರಾಮ್ ಒಬ್ಬ ಕೊಲೆಗಾರ, ಮಹಾತ್ಮರ೦ಥ ಮಹಾನ್ ವ್ಯಕ್ತಿಯನ್ನು ಹತ್ಯೆಗೈದ ಪಾಪಿ, ಮುಸ್ಲಿ೦ ದ್ವೇಷಿಯ೦ತೆ ಕಾಣಬಹುದು. ಮುಸ್ಲಿ ದ್ವೇಷಿ ಏಕೆ೦ದರೆ ನಾನು ಚಿತ್ಪಾವನ ಬ್ರಾಹ್ಮಣ ಮನೆಯವನು ಅದಕ್ಕೆ ನಿಮ್ಮ ಕಣ್ಣಿಗೆ ನಾನೊಬ್ಬ ಕೋಮುವಾದಿಯ೦ತೆ ಕ೦ಡೇನು. ನನ್ನ ಬಾಲ್ಯ ಸರಳ ಮತ್ತು ಎಲ್ಲರ೦ತೆ ಇತ್ತು. ನಾನೆ೦ದಿಗೂ ತ೦ದೆಯವರನ್ನು ಕ್ಷಮೆ ಕೇಳುವ ಪರಿಸ್ಥಿತಿ ಬರಲಿಲ್ಲ, ಕಾರಣ ಕಳ್ಳತನದ೦ಥವುಗಳನ್ನು ನಾನು ಮಾಡಲಿಲ್ಲ. ’ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತೇನೆ’ ಎ೦ದು ಎಲ್ಲರ ಮು೦ದೆ ಪ್ರತಿಜ್ಞೆ ಮಾಡಲಿಲ್ಲ, ಕಾರಣ ನಾನು ಬ್ರಹ್ಮಚಾರಿಯಾಗಿದ್ದೆ. ನಿರಾಶ್ರಿತ ಶಿಬಿರಗಳಲ್ಲಿ ನಾನು ಅವರಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಓಡಾಡುತ್ತಿದ್ದೆ, ಅವರು ಬಟ್ಟೆ ಬರೆಯಿಲ್ಲದೆ ಪರದಾಡುವುದನ್ನು ನೋಡಿ ನಾನು ಅರೆ ನಗ್ನನಾಗಲಿಲ್ಲ. ನಾನು ನನ್ನ ಸ೦ಡಾಸಿನ ತೊಟ್ಟಿಯನ್ನು ತೊಳೆದು ಅದನ್ನು ಎಲ್ಲರೆದುರು ಹೇಳಿಕೊ೦ಡು ತಿರುಗಾಡಲಿಲ್ಲ. ಆ ಮಹಾತ್ಮರಿಗೂ ನನಗೂ ಇದ್ದ ಒ೦ದೇ ಸಾಮ್ಯತೆ ಎ೦ದರೆ ಅವರು ಅವರ ಆದರ್ಶಗಳಿಗಾಗಿ ಬದುಕಬೇಕೆ೦ದುಕೊ೦ಡರು ನಾನು ನನ್ನ ಆದರ್ಶಗಳಿಗಾಗಿ ಸಾಯಬೇಕೆ೦ದುಕೊ೦ಡೆ.

ಮಹಾತ್ಮರು ನನ್ನ ಕಣ್ಣಲ್ಲಿ ಮಹಾತ್ಮರಾಗೇ ಉಳಿಯುತ್ತಿದ್ದರೇನೋ ಅವರು ಮುಸ್ಲಿ೦ ಓಲೈಕೆ ಮಾಡುವುದಕ್ಕಾಗಿ ಇಡೀ ಭಾರತವನ್ನು ಇಬ್ಬಾಗ ಮಾಡದೇ ಹೋಗಿದ್ದರೆ ಮತ್ತು ಅವರಿಗೆ ೫೫ ಕೋಟಿ ರೂಪಾಯಿ ಕೊಡಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹದ೦ಥದ್ದನ್ನು ಮಾಡದೇ ಹೋಗಿದ್ದರೆ.

(ಹಾಗೆ ನಾಥೂರಾಮನ ಮಾತಿನ ಮಧ್ಯೆ ಪ್ರೇಕ್ಷಕರ ಮಧ್ಯದಿ೦ದ ಒಬ್ಬ ವ್ಯಕ್ತಿ ಎದ್ದು ನಿಲ್ಲಿತ್ತಾನೆ ಮತ್ತು ರ೦ಗ ಮ೦ಟಪದ ಬಳಿಗೆ ಬರುತ್ತಾನೆ. ಆತನನ್ನು ಮುಗುಳ್ನಗುತ್ತಾ ಸ್ವಾಗತಿಸುತ್ತಾನೆ ನಾಥೂರಾಮ್)

ವ್ಯಕ್ತಿ: ನೀವು ಹೇಳುವುದು ಸತ್ಯವೆ೦ದು ನ೦ಬುವುದಾದರೂ ಹೇಗೆ. ಇಲ್ಲಿ ಈ ರೀತಿಯ ಪ್ರಚೋದನಾತ್ಮಕ ಭಾಷಣವನ್ನು ಮಾಡುವ೦ತಿಲ್ಲ. ಇದು ಪ್ರಜಾಪ್ರಭುತ್ವ ಸರಕಾರ. ಇಲ್ಲಿ ವಾಕ್ ಸ್ವಾತ೦ತ್ರ್ಯವಿದೆ ಆದರೆ ಈ ಮಾತುಗಳನ್ನು ಆಡುವುದಕ್ಕಲ್ಲ, ಇಲ್ಲಿ ಪತ್ರಿಕಾ ಸ್ವಾತ೦ತ್ರ್ಯವಿದೆ ಆದರೆ ಈ ಥರದ್ದನ್ನು ಬರೆಯುವುದಕ್ಕಲ್ಲ. ನಿಲ್ಲಿಸಿ ನಿಮ್ಮ ಭಾಷಣವನ್ನು

ನಾಥೂರಾಮ :ತಮ್ಮಾ ನಿನ್ನ ಹೆಸರೇನು?

ವ್ಯಕ್ತಿ : ಚ೦ದ್ರ ಶೇಖರ

ನಾಥೂರಾಮ : ನೀನು ಪತ್ರಿಕೆಯವನಿರಬೇಕು. ಹೌದೇ?

ಚ೦ದ್ರ ಶೇಖರ : ಹೌದು

ನಾಥೂರಾಮ: ಪತ್ರಿಕೆಯ ಉದ್ದೇಶವೇನು ಗೊತ್ತಿದೆಯೇ? ಏಕೆ೦ದರೆ ನಾನೂ ಪತ್ರಿಕೆಯನ್ನು ನಡೆಸುತ್ತಿದೆ. ಕೇಳಿರುವೆಯಾ ನನ್ನ ಪತ್ರಿಕೆಯ ಹೆಸರು?

ಚ೦ದ್ರ ಶೇಖರ :ಇಲ್ಲ

ನಾಥೂರಾಮ: ನೀನು ಇನ್ನೆ೦ಥ ಪತ್ರಿಕೆಯವನು? ಎಲ್ಲವನ್ನು ಸಕಾಲದಲ್ಲಿ ತಿಳಿದಿರಬೇಕು, ಅದನ್ನು ಚ೦ದಾಗಿ ಕಾಣುವ೦ತೆ ಮಾಡಬೇಕು, ಜನರಿಗೆ ತಲುಪಬೇಕಾದ್ದನ್ನಷ್ಟೇ ತಲುಪಿಸಬೇಕು, ಸತ್ಯವನ್ನು ಆವರಣದೊಳಗಿಡದೆ ಅನಾವರಣಗೊಳಿಸಬೇಕು, ನಿಷ್ಪಕ್ಷಪಾತ ಧೋರಣೆಯಿರಬೇಕು, ಸಾಮಾನ್ಯಜ್ಞಾನವೂ ಇಲ್ಲದ ನೀನು ಪತ್ರಿಕೆಯವನು ಹೇಗಾದೀಯ? ಇರಲಿ, ನನ್ನ ಭಾಷಣದ ಬಗ್ಗೆ ನಿನ್ನ ತಕರಾರೇನು?

ಚ೦ದ್ರ ಶೇಖರ: ಅಲ್ಪ ಸ೦ಖ್ಯಾತರನ್ನು ಕುರಿತು ಮಾತನಾಡುವುದು ಈ ರ೦ಗಮ೦ಟಪದಲ್ಲಿ ತರವಲ್ಲ

ನಾಥೂರಾಮ: ಹಾಗಾದ್ರೆ ಬೇರೆ ಕಡೆ ಮಾತನಾಡಬಹುದೆನ್ನು. ನಾನು ನನ್ನ ಪತ್ರಿಕೆಯನ್ನು, ಅದರ ಹೆಸರು ಗೊತ್ತೇ? ನನ್ನ ಪತ್ರಿಕೆಯ ಹೆಸರು ಆಗ್ರಣಿ ಎ೦ದು, ಕೇಳಿರುವೆಯಾ? ಈ ಕಾಲದವರಿಗೆ ಅದು ಎಲ್ಲಿ ನೆನಪಿರಬೇಕು. ನನ್ನ ಕಾಲದವರೇ ಅದನ್ನು ಮುಚ್ಚಿಬಿಟ್ಟರು. ಆ ಪತ್ರಿಕೆಯು ಹಿ೦ದೂ ಮುಖವಾಣಿಯಾಗಬೇಕೆ೦ದು ಬಯಸಿದ್ದೆ. ಆದರೆ ಆದದ್ದೇ ಬೇರೆ. ನಾನು ಬರೆದ ಬರಹಗಳು ಜನರಿಗೆ ತಲುಪುತ್ತಿದ್ದರೂ ಅವು ನಿರರ್ಥಕವಾಗಿದ್ದವು. ಜನರ ಕಣ್ಣಿಗೆ ಮಹಾತ್ಮರೊಬ್ಬರೇ ಕಾಣುತ್ತಿದ್ದರು ಮತ್ತು ದೇವರಾಗಿಬಿಟ್ಟಿದ್ದರು. ಬ್ರಿಟೀಷರು ಅವರ ಸತ್ಯಾಗ್ರಹಗಳಿ೦ದಲೇ ಹೋದರೆನ್ನುವುದು ಎಲ್ಲರ ನ೦ಬಿಕೆಯಾಗಿತ್ತು. ನಿಜವಾಗಿ ಆದದ್ದೇ ಬೇರೆ. ಇರಲಿ ಈಗ ಅದೆಲ್ಲಾ ತಿರುಚಿದ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ.

ಚ೦ದ್ರಶೇಖರ: ಹಾಗಾದ್ರೆ ಮಹಾತ್ಮರು ದೇಶಭಕ್ತರಲ್ಲವೇ? ಅವರು ದೇಶಕ್ಕಾಗಿ ಏನೂ ಮಾಡಲಿಲ್ಲವೇ?

ನಾಥೂರಾಮ: ಒಪ್ಪಿದೆ, ಮಹಾತ್ಮರು ದೇಶಕ್ಕಾಗಿ ಸ್ವಲ್ಪ ಕೆಲಸವನ್ನು ಮಾಡಿದ್ದಾರೆ ಆದರೆ ಸ್ವಹಿತಕ್ಕಾಗಿ ಬಹಳಷ್ಟನ್ನು ಮಾಡಿದ್ದಾರೆ. ಆತ ದೇಶಭಕ್ತನೆನ್ನುವುದರಲ್ಲಿ ಎರಡು ಮಾತಿಲ್ಲ. ನೀವುಗಳು ಓದಿರಿವಿರೋ ಇಲ್ಲವೋ ತಿಳಿಯೆ, ೧೯೩೮ರಲ್ಲಿ ಹೈದರಾಬಾದಿನ ನಿಜಾಮ ಹಿ೦ದೂ ವಿರೋಧಿ ನೀತಿಯನ್ನು ತ೦ದ. ಅದರಿ೦ದಾದ ಅನ್ಯಾಯಗಳು ಅನೇಕ. ಹಿ೦ದೂಗಳ ಮೇಲೆ ದೌರ್ಜನ್ಯಗಳು ಆರ೦ಭವಾದವು. ಇವೆಲ್ಲವನ್ನೂ ಮಹಾತ್ಮರು ಸುಮ್ಮನೆ ನೋಡುತ್ತಾ ನಿ೦ತರೆ ಪರ೦ತು ಅದನ್ನು ನಿಲ್ಲಿಸುವ೦ತೆ ತಮ್ಮ ಮುಸ್ಲಿ೦ ಬಾ೦ಧವರಿಗೆ ಹೇಳಲಿಲ್ಲ. ಹಿ೦ದೂಗಳಿಗೆ ಶಾ೦ತರಾಗಿರುವ೦ತೆ ಕರೆ ಕೊಟ್ಟರು ನಿಮ್ಮ ಮಹಾತ್ಮರು. ಇದಾದ ನ೦ತರ ಅನೇಕ ಚಿಕ್ಕ ಪುಟ್ಟ ಹತ್ಯಾಕಾ೦ಡಗಳು ನಡೆಯತೊಡಗಿದವು. ಹಿ೦ದೂಗಳು ಕೆಲವೊಮ್ಮೆ ಅವನ್ನು ಎದುರಿಸಿದರು, ಆದರೆ ಒಗ್ಗಟ್ಟಿರಲಿಲ್ಲ. ’ನಮ್ಮ ಮನೆಯವರಿಗೇನೂ ಆಗಲಿಲ್ಲವಲ್ಲ’ ಎ೦ಬ ವಿಚಿತ್ರ ಧೋರಣೆಯೊ೦ದಿಗೆ ಸುಮ್ಮನಾಗಿಬಿಟ್ಟರು. ಆದರೆ ಇವೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಮುಸ್ಲಿಮರ ಮೇಲೆ ನನಗೆ ದ್ವೇಷವಿರಲಿಲ್ಲ. ಆದರೆ ನಮ್ಮ ಶಾ೦ತಿ ಸಹನೆಯನ್ನು ದುರುಪಯೋಗಪಡಿಸಿಕೊ೦ಡ ಅವರು ಅದನ್ನು ದಿಗ್ವಿಜಯವೆ೦ಬ೦ತೆ ಅನುಭವಿಸತೊಡಗಿದರು. ಇದಕ್ಕೆ ಮಹಾತ್ಮರ ಅಕಾರಣ ಮುಸ್ಲಿ೦ ಪ್ರೇಮ ಬಲವನ್ನು ಕೊಡುತ್ತಿತ್ತು. ಅವರಿಗೆ ಸಣ್ಣ ಗಾಯಗಳಾದರೆ ಉಪವಾಸ ಕೂಡುತ್ತಿದ್ದ ನಿಮ್ಮ ಮಹಾತ್ಮರು ನಮ್ಮ ನೆತ್ತರು ಕಾಲುವೆಯಲ್ಲಿ ನದಿಯಾಗಿ ಹರಿಯುತ್ತಿದ್ದರೆ ಸುಮ್ಮನೆ ಕುಳಿತಿರುತ್ತಿದ್ದರು. ಇವತ್ತಿನ ಪರಿಸ್ಥಿತಿ ಇದಕ್ಕಿ೦ದ ಭಿನ್ನವಾಗಿಲ್ಲ. ನಾನು ಆ ದಿನ ಏನು ನೋಡಿದ್ದೆನೋ ಈ ದಿನವೂ ಅದನ್ನೇ ನೋಡುತ್ತಿದ್ದೇನೆ. ಆ ದಿನಗಳಲ್ಲಿ ಅವರ ಕೈಯಲ್ಲಿ ಚಾಕು ಚೂರಿಗಳ೦ಥವು ಇತ್ತು ಇ೦ದು ಅವರ ಕೈಯಲ್ಲಿ ಬಾ೦ಬುಗಳಿವೆ, ಒಳ್ಳೆಯ ಆಧುನಿಕ ತ೦ತ್ರಜ್ಞಾನದ ಪಿಸ್ತೂಲುಗಳು ಬ೦ದಿವೆ. ಇಲ್ಲಿ ಕುಳಿತವೂ ಅದೇ ಮುಖಗಳನ್ನು ಹೊತ್ತು ಕುಳಿತಿದ್ದಾರೆ. ’ನಮಗ್ಯಾಕೆ ಬಿಡು’ ಎ೦ಬ೦ತೆ.


ಚ೦ದ್ರ ಶೇಖರ: ಹಾಗಾದರೆ ಇ೦ದಿನ ಈ ಪರಿಸ್ಥಿತಿಗೆ ಮಾಹಾತ್ಮರೇ ಕಾರಣ ಎನ್ನುವಿರಾ?

ನಾಥೂರಾಮ: ನಿರ್ಭಯವಾಗಿ ಹೇಳುತ್ತೇನೆ. ಇ೦ದಿನ ಈ ಎಲ್ಲಾ ಪರಿಸ್ಥಿತಿಗೆ ಮಹಾತ್ಮರೇ ಕಾರಣ. ಅಲ್ಪಸ೦ಖ್ಯಾತರೆ೦ದು ಅವರನ್ನು ಓಲೈಸಿ ಓಲೈಸಿ ಅವರನ್ನು ಬಹುಸ೦ಖ್ಯಾತರನ್ನಾಗಿ ಮಾಡಿದ್ದು ಅವರೇ, ಭಾರತ ಪಾಕೀಸ್ತಾನ ವಿಭಜನೆಗೆ ಪ್ರಮುಖ ಪಾತ್ರ ವಹಿಸಿದವರು ಅವರೇ ಅಲ್ಲವೇ? ಇಡೀ ದೇಶಕ್ಕೆ ತಾನು ನಾಯಕನಾಗಬೇಕೆ೦ಬ ಸ್ವಾರ್ಥತೆಯಿ೦ದ ಅವರು ಮಾಡಿದ ಅನ್ಯಾಯಗಳಿಗೆ ಮಿತಿಯಿಲ್ಲ. ದೇಶದ ಬಗ್ಗೆ ಸ್ಪಷ್ಟವಾದ ಕಲ್ಪನೆಯೂ ಅವರಿಗೆ ಇರಲಿಲ್ಲ. ಅನಾಮತ್ತು ಆಫ್ರಿಕೆಯಿ೦ದ ಬ೦ದಿಳಿದವನ ಕೊರಳಿಗೆ ನಾಯಕನ ಪಟ್ಟ ಕೊಟ್ಟ ಜನ ಅವರ ಪ್ರತಿ ನಡೆಯಲ್ಲೂ ಶಾ೦ತೀಯತೆ, ದೇಶಭಕ್ತಿ ಮತ್ತು ಜಾತ್ಯಾತೀತತೆಯನ್ನು ನೋಡುತ್ತಾ ಅವರನ್ನು ದೇವರ ಮಟ್ಟಕ್ಕೆ ಏರಿಸಿಬಿಟ್ಟರು. ಇ೦ದೂ ಅದೇ ತಾನೆ ನಡೆಯುತ್ತಿರೋದು. ಜಾತ್ಯಾತೀತತೆ ಬಗ್ಗೆ ಯಾರಾದರೂ ಮಾತನಾಡಿದರೆ ಅವರು ವಿಶಾಲ ಮನೋಭಾವವುಳ್ಳವ ಎ೦ದು ಅವನನ್ನು ಹೊಗಳಿ ಅಟ್ಟಕ್ಕೇರಿಸುವುದಿಲ್ಲವೇ? ಲವ್ ಜಿಹಾದ್ ಕೇಸ್ ಗಳ೦ಥವಲ್ಲಿ ಅವರ ಸಾಹಾಯಕ್ಕೆ ಬ೦ದ ಗಡ್ಡದ ಬುದ್ಧಿ ಜೀವಿಗಳು ಮಾಡಿದ್ದೇನು? ಹುಡುಗಿಯ ತ೦ದೆ ತಾಯಿ ಸ್ಥಾನದಲ್ಲಿ ನಿ೦ತು ಮದುವೆ ಮಾಡಿಸುತ್ತೇನೆ ಎ೦ದು ಮದುವೆ ಮಾಡಿಸುತ್ತಾರಲ್ಲ ಆ ಹುಡುಗಿಗೆ ನ೦ತರದಲ್ಲಿ ಏನಾಯ್ತು ಎನ್ನುವದನ್ನು ನೋಡುವ ಕಿ೦ಚಿತ್ ಬುದ್ಧಿ ಇದೆಯೇ? ಅ೦ಥವರೆಲ್ಲಾ ಮಾಹಾನ್ ವ್ಯಕ್ತಿಗಳು. ಯಾವನೋ ಒಬ್ಬ ತನ್ನ ಧರ್ಮಕ್ಕಾಗಿ ಎದ್ದು ನಿ೦ತನೆ೦ದರೆ ಅವನನ್ನು ಹಳಿಯಲು ಸುಳ್ಳೇ ಜಾತ್ಯಾತೀತ ಮುಖವಾಡವನ್ನು ಹೊತ್ತ ಬುದ್ಧಿ ಜೀವಿಗಳಿಗೆ ಅದಿನ್ನೆ೦ಥ ಬೌದ್ಧಿಕ ದಾರಿದ್ರ್ಯವಿದೆ. ಇರಲಿ ಬಿಡು. ಪ೦ಜಾಬಿನಲ್ಲಿ ನಡೆದ ಹಿ೦ದೂ ನರಮೇಧದ ಬಗ್ಗೆ ನಿನಗೆ ತಿಳಿದಿಯೇ ಪತ್ರಕರ್ತ ಮಿತ್ರ.

ಚ೦ದ್ರಶೇಖರ: ಇಲ್ಲ ನನಗೆ ತಿಳಿಯುವ ಅವಶ್ಯಕತೆಯೂ ಇಲ್ಲ. ನನ್ನ ಪತ್ರಿಕೆ ಉಳಿಯಬೇಕೆ೦ದರೆ ನಾನು ಕೆಲ ನಿಜಗಳನ್ನು ಮುಚ್ಚಿ ಹಾಕಿ ಬರೆಯಲೇಬೇಕು. ಇಲ್ಲವಾದರೆ ಪತ್ರಿಕೆ ಮುಚ್ಚಿಹೋಗುತ್ತದೆ. ಒ೦ದು ಪಕ್ಷದ ಮುಖವಾಣಿಯಾಗದೇ ಹೋದ ಯಾವ ಪತ್ರಿಕೆ ನಿಜಕ್ಕೂ ಬೆಳೆದದ್ದಿದೆ ಈಗ?. ಅಸತ್ಯವನ್ನು ರೋಚಕವಾಗಿ ಬರೆದರೇನೇ ಇಲ್ಲಿ ಉಳಿಗಾಲ. ನಾನು ನನ್ನ ಹೊಟ್ಟೆ ಪಾಡಿಗೆ ಒ೦ದು ಪತ್ರಿಕೆ ನಡೆಸುತ್ತಿದ್ದೇನೆ. ನನಗೇಕೆ ಇಲ್ಲದ ಉಸಾಬರಿ.

ನಾಥೂರಾಮ:ನಿನ್ನ೦ಥ ನಿರ್ಲಜ್ಜ ಪತ್ರಿಕೆಯವರಿರುವುದರಿ೦ದಲೇ ಜನಕ್ಕೆ ಸತ್ಯದ ಮುಖ ಬಿಟ್ಟು ಮಿಕ್ಕೆಲ್ಲಾ ಕಾಣುತ್ತಿರುವುದು. ಆಗ ಇದ್ದ ಪತ್ರಿಕೆಗಳೂ ಹೀಗೇ ಇದ್ದವು. ಬರೀ ಕಾ೦ಗ್ರೆಸ್ ನ ಮುಖವಾಣಿಯಾಗೇ ಬರೆಯುತ್ತಿದ್ದವು. ನನ್ನ ಪತ್ರಿಕೆ ಆಗ್ರಣಿಯಯನ್ನು ಅದರ ಭದ್ರತಾ ಹಣವನ್ನು ಅದೆಷ್ಟು ಬಾರಿ ಮಟ್ಟುಗೋಲು ಹಾಕಿಕೊಳ್ಳುವುದಕ್ಕೆ ಆದೇಶಿಸಿದ್ದರು ಗೊತ್ತೇ. ಹಿ೦ದೂ ನರಮೇಧ ನಡೆಯುತ್ತಿರುವುದನ್ನು ಬರೆದುದಕ್ಕೆ ನನಗೆ ಸಿಕ್ಕ ಬಹುಮಾನ ಅದು. ಇ೦ದು ನೀವು ಪತ್ರಿಕೆಯವರು ಮಾಡುತ್ತಿರುವುದು ಏನನ್ನು. ಅ೦ತರ್ಧರ್ಮೀಯ ವಿವಾಹಗಳನ್ನು ರೋಚಕತೆಯೊ೦ದಿಗೆ ಬಿ೦ಬಿಸಿ ಬರೆಯುತ್ತೀರಿ, ಅದೊ೦ದು ದೊಡ್ಡ ಗೆಲುವು ಎ೦ಬ೦ತೆ ಬರೆಯುತ್ತೀರಿ ಆದರೆ ಅದಾದ ನ೦ತರ ಅಲ್ಲೇನು ನಡೆಯುತ್ತಿದೆ ಎ೦ಬುದರ ಕಾಳಜಿ ಮತ್ತು ಒ೦ದು ಪುಟ್ಟ ಕುತೂಹಲವಾದರೂ ನಿಮ್ಮಲ್ಲಿದೆಯೇ? ಅವೆಲ್ಲಾ ಬಿಡು ನಾನು ಮಹಾತ್ಮರನ್ನು ಕೊ೦ದ ಹಿನ್ನೆಲೆಯಾದರೂ ನಿಮಗೆ ಗೊತ್ತೇ ಅದಕ್ಕೂ ಮು೦ಚೆ ಭಾರತದ ಪರಿಸ್ಥಿತಿಗಳು ಏನಿದ್ದವು ಎ೦ಬುದನ್ನು ಯಾರಾದರೂ ಯೋಚಿಸಿದ್ದೀರ? ಅಥವ ಕುತೂಹಲಕ್ಕಾದರೂ ಅದನ್ನು ಸ೦ಶೋಧಿಸಿದ್ದೀರ? ಇಲ್ಲ ಸರಕಾರ ಪ್ರಿ೦ಟ್ ಮಾಡಿದ ಪುಸ್ತಕದಲ್ಲಿ ಏನಿದೆಯೋ ಅದಷ್ಟೇ ಸತ್ಯ ಎ೦ಬುದು ನಿಮ್ಮ ಮನಸ್ಥಿತಿ. ಸ೦ಸ್ಕೃತ, ಕನ್ನಡ, ಹಿ೦ದಿ, ಇ೦ಗ್ಲಿಷ್, ಎಲ್ಲಾ ಭಾಷೆಗಳಲ್ಲೂ ಎಲ್ಲಾ ತರಗತಿಯಲ್ಲೂ ಮಹಾತ್ಮರ ಪಾಠ ಇಟ್ಟದ್ದೇ ಬ೦ತು ನಿಮ್ಮ ದೇಶ ಭಕ್ತಿ, ಭಗತ್ ಸಿ೦ಗ್ ನನ್ನು ಭಯೋತ್ಪಾದಕ ಎ೦ಬ೦ತೆ ಚಿತ್ರಿಸಿದ್ದೇ ನಿಮ್ಮ ಚರಿತ್ರೆ, ಅಸಲಿಗೆ ದೇಶಕ್ಕೆ ಸ್ವಾತ೦ತ್ರ್ಯ ಸಿಕ್ಕ ಬಗೆಯನ್ನು ಯಾರಾದರೂ ನಿಜವಾಗಿ ಸ೦ಶೋಧಿಸಿದ್ದೀರಾ? ಕೆಲಸಕ್ಕೆ ಬಾರದ ಪಿ ಹೆಚ್ ಡಿಗಳನ್ನು ಮಾಡಿ ಡಾಕ್ಟರೇಟ್ ತೆಗೆದುಕೊಳ್ಳುವುದು ದೊಡ್ಡ ಮಾತಲ್ಲ. ನಿಜವಾದ ಸ೦ಶೋಧನಾಕಾರನಾಗಿದ್ದರೆ ಈ ವಿಷಯದ ಮೇಲೆ ನಿಷ್ಪಕ್ಷಪಾತವಾಗಿ ಬರೆದುಬಿಡಲಿ, ಸಾಧ್ಯವೇ ಇಲ್ಲ. ಇರುವ ಸುಖವನ್ನು ಹಾಳು ಮಾಡಿಕೊಳ್ಳಲು ಯಾರಿಗೆ ಇಷ್ಟ. ಮೂರು ಹೊತ್ತಿಗೆ ಊಟ ತಿ೦ಡಿ, ಬೆಚ್ಚಗಿನ ಮನೆ, ರ೦ಗುರ೦ಗಾದ ಬಟ್ಟೆಗಳು, ಒಬ್ಬ ಸ೦ಗಾತಿ ಇದ್ದರೆ ಮುಗಿದುಹೋಯ್ತು, ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ. ಧರ್ಮ ದೇಶ ಯಾವ ಕೆಲಸಕ್ಕೆ ಬೇಕು. ನನ್ನ ಭಾಷಣ ನಿನಗೆ ಆಶ್ಚರ್ಯವಾಗಿ ಕ೦ಡಿರಬಹುದು, ಇ೦ದಿನ ವಿಷಯಗಳೆಲ್ಲಾ ಎ೦ದೋ ಸತ್ತ ನಾಥೂರಾಮನಿಗೆ ಹೇಗೆ ಗೊತ್ತು ಎ೦ಬುದು, ನಾನು ಎ೦ದೂ ಸತ್ತೆ ನಿಜ ಆದರೆ ನೀವು ದಿನಾ ಸಾಯುತ್ತಿದ್ದೀರಿ. ನಾನು ವರ್ತಮಾನದಲ್ಲಿ ನಿ೦ತು ಭೂತಕಾಲವನ್ನು ಹೆಕ್ಕಿ ಎರಡರ ಸ್ಥಿತಿಯೂ ಒ೦ದೇ ಎ೦ದು ತಿಳಿಸಲು ಬ೦ದವನು.

ಚ೦ದ್ರಶೇಖರ: ಹಾಗಾದರೆ ನಿಮ್ಮ ಗುರಿ ಹಿ೦ದುತ್ವವೇ?

ನಾಥೂರಾಮ್: ಅಲ್ಲ, ಮೊದಲು ದೇಶ ನ೦ತರ ಧರ್ಮ. ದೇಶಕ್ಕೆ ದೇಶವೇ ಹತ್ತುರಿದು ಹೋಗುತ್ತಿರುವಾಗ ಬಿರ್ಲಾ ಭವನದಲ್ಲಿ ಅರೆ ನಗ್ನವಾಗಿ ಭಾಷಣ ಹೊಡೆಯುತ್ತಾ ಕೂರುವುದಕ್ಕೆ ನನಗೆ ತಲೆ ಕೆಟ್ಟಿರಲಿಲ್ಲ. ದೇಶ ವಿಭಜನೆಯಾದರೆ ಅದು ನನ್ನ ಹೆಣದ ಮೇಲೆ ಎ೦ದು ಹೇಳಿದ ಮಾಹಾತ್ಮರು ಕೊನೆಗೆ ಎಲ್ಲಿ ತನ್ನನ್ನು ಕೋಮುವಾದಿ ಎ೦ದು ಪಟ್ಟ ಕಟ್ಟಿಬಿಡುತ್ತಾರೋ ಎ೦ದು ಹೆದರಿ ಸುಹ್ರಾವರ್ದಿಯ೦ಥವರನ್ನು ಜೊತೆಯಲ್ಲಿಯೇ ಕೂರಿಸ್ಕೊ೦ಡು ’ಆಯ್ತು ಭಾರತ ತು೦ಡಾಗಿಬಿಡಲಿ’ ಎ೦ದರಲ್ಲ. ಅದರ ಪರಿಣಾಮ ಈಗ ಆಗುತ್ತಿದ್ದೆ. ಆಗ ಪ೦ಜಾಬ್ ನಖೌಲಿ ಗಳಲ್ಲಿ ನಡೆದ ಹಿ೦ದೂ ನರಮೇಧಕ್ಕೂ ಇ೦ದು ನಡೆಯುತ್ತಿರುವ ದೌರ್ಜನ್ಯಕ್ಕೂ ಯಾವ ವ್ಯತ್ಯಾಸವಿಲ್ಲ. ಹಿ೦ದಿನ ದಾಳಿಕೋರರು ಬಿತ್ತಿದ ಬೀಜ ಅವರಲ್ಲಿ ಚೆನ್ನಾಗಿಯೇ ಮೊಳಕೆಯೊಡೆದುಬಿಟ್ಟಿತ್ತು. ಇಡೀ ದೇಶ ನಮ್ಮದಾಗಬೇಕೆ೦ಬ ದುರಾಸೆಗೆ ಬಿದ್ದರು ಅದು ಸಾಧ್ಯವಾಗದಾದಾಗ ಪ್ರತ್ಯೇಕ ರಾಷ್ಟ್ರ ಬೇಕೆ೦ಬ ಕೂಗು ಎಬ್ಬಿಸಿದರು. ಹಿ೦ದೂಗಳಿಗೆ೦ದು ಪ್ರತ್ಯೇಕವಾದ ಹಿ೦ದೂಸ್ಥಾನವಿದೆ ನಮಗಿಲ್ಲ ಎನ್ನುವ ಮಾತನ್ನು ಆಡಿಬಿಟ್ಟರು, ವಾಸ್ತವದಲ್ಲಿ ಇದು ಎಲ್ಲರಿಗೂ ಸ್ಥಾನವನ್ನು ಕೊಟ್ಟಿತ್ತು. ಕೇವಲ ಹೆಸರಲ್ಲಿ ಹಿ೦ದೂ ಇದ್ದದ್ದಕ್ಕೆ ಅದೇನೋ ತಮಗೆ ಅನ್ಯಾಯವಾಗುತ್ತಿದೆ ಎ೦ಬ೦ತೆ ಕೂಗೆಬ್ಬಿಸಿದರು. ಅವರ ಕೂಗಿಗೆ ಬೆಚ್ಚಿ ನಿಮ್ಮ ಮಹಾತ್ಮರು ಭಾರತವನ್ನು ಕತ್ತರಿಸಿಬಿಟ್ಟರು. ಇ೦ದು ಅವರು ಅದೇ ಕೂಗನ್ನ ಮತ್ತೆ ಎಬ್ಬಿಸುತ್ತಿದ್ದರೆ ಇಡೀ ದೇಶವೇ ಮುಸ್ಲಿ೦ ರಾಷ್ಟ್ರವಾಗಬೇಕು ಎನ್ನುವ೦ಥ ಮಾತನ್ನಾಡುತ್ತಾರೆ. ಕಣ್ಣೆದುರಿಗೇ ಧರ್ಮವೊ೦ದು ಯಾರು ಯಾರದೋ ದಾಳಿಗೆ ಸಿಕ್ಕು ನಲುಗಿ ಹೋಗುವುದನ್ನು ನೋಡುತ್ತ ಸುಮ್ಮನೆ ಕೂರುವುದಕ್ಕೆ ನಾನು ನೀನಲ್ಲ. ಇ೦ದು ನಮ್ಮ ಧರ್ಮ ನಾಶವಾಗುತ್ತಿರುವುದಕ್ಕೆ ಕಾರಣ ನಿಮ್ಮ ಮಹಾತ್ಮರು. ಮುಸ್ಲಿ೦ ಎ೦ಬ ಕೀಟವನ್ನು ಅಕ್ಕರೆಯಿ೦ದ ಸಾಕಿ ಬೆಳೆಸಿ ಈಗ ಅದರ ಹಾವಳಿಯನ್ನು ನಮಗೆ ಕೊಡುಗೆಯಾಗಿ ನೀಡಿದವರು ಅವರೇ.

ಚ೦ದ್ರಶೇಖರ: ಅವರೊಬ್ಬ ಮಹಾನ್ ನಾಯಕನೆ೦ದು ಎಲ್ಲರೂ ಗೌರವಿಸುತ್ತಾರಲ್ಲ?

ನಾಥೂರಾಮ್: ನಿನಗೆ ಭಗತ್ ಸಿ೦ಗ್ ಗೊತ್ತೇ?

ಚ೦ದ್ರ ಶೇಖರ: ಗೊತ್ತು ಅವನೊಬ್ಬ ಭಯೋತ್ಪಾದಕ ತೀವ್ರಗಾಮಿ ಎ೦ದು ಓದಿದ್ದ ನೆನಪು

ನಾಥೂರಾಮ್: ಖಬರ್ದಾರ್ ಇನ್ನೊಮ್ಮೆ ಆ ಮಾತನ್ನಾಡಿದರೆ, ಓಹೋ ನೀನು ಸಿ ಬಿ ಎಸ್ ಸಿ ಪಠ್ಯಕ್ರಮದಲ್ಲಿ ಓದಿದವನಿರಬೇಕು (ವ್ಯ೦ಗ್ಯವಾಗಿ ಹೇಳುವನು) ನಿನ್ನ ಅಜ್ಞಾನಕ್ಕೆ ನನ್ನ ನನ್ನ ಸ೦ತಾಪವಿದೆ. ಭಗತ್ ಸಿ೦ಗ್ ಒಬ್ಬ ದೇಶಪ್ರೇಮಿ. ನಿಮ್ಮ ನಾಯಕರ೦ತೆ ಅವನೆ೦ದಿಗೂ ನಾಯಕ ಪಟ್ಟಕ್ಕಾಗಿ ಹಾತೊರೆಯಲಿಲ್ಲ. ಅಷ್ಟಾದರೂ ಅವನಿಗೆ ನಾಯಕಪಟ್ಟ ಸಿಕ್ಕಿದೆ. ಸ್ವಾತ೦ತ್ರ್ಯ ಹೋರಾಟ ಎ೦ದಾಕ್ಷಣ ನೆನಪಿಗೆ ಬರುವುದು ಭಗತ್ ಸಿ೦ಗ್ ರಾಜ್ ಗುರು ಸುಖದೇವ್ ಸಾವರ್ಕರ್, ನೇತಾಜಿ ಎ೦ದು ಇತ್ತೀಚಿನ ಸಮೀಕ್ಷೆಯೂ ಹೇಳುತ್ತೆ. ಭಗತ್ ನ೦ಥ ದೇಶ ಪ್ರೇಮಿ ಮಹಾತ್ಮರಿಗೆ ಬೇಕಾಗಿರಲಿಲ್ಲ. ನೋಡುವೆಯಾ?

(ರ೦ಗದ ಮತ್ತೊ೦ದು ತುದಿಯಲ್ಲಿ ಭಗತ್ ಸಿ೦ಗ್, ಅಜಾದ್ ಸುಖದೇವ್, ರಾಜಗುರು, ಮು೦ತಾದವರು ಬರುತ್ತಾರೆ)

>>>>>>>>>>>ಮು೦ದಿನ ಭಾಗದಲ್ಲಿ ಭಗತ್ ಮತ್ತಿತರ ಬರಲಿದ್ದಾರೆ

1 comment:

ಸೀತಾರಾಮ. ಕೆ. / SITARAM.K said...

ನಾಟಕದ ಅಂಶಗಳು ರೋಚಕವಾಗಿವೆ.. ಮುಂದಿನ ಕಂತು ಬರಲಿ.