Wednesday, September 15, 2010

ಬ್ರಹ್ಮ ಭ್ರೂಣ

ಕೋಪಗೊಂಡನೆ ಚಂದಿರ


ತೇಜಸ್ವಿ ತಪಸ್ವಿ ಬ್ರಹ್ಮ

ಎತ್ತಲೋ ನೋಡಿ

ತನ್ನೆಲ್ಲಾ ಕೊಪದುರಿಯ

ಚಿತ್ರಿಸಿದ ಚಿತ್ರದಲಿ

ತಣ್ಣಗಿನ ಬೇಸರದಲಿ

ಚಂದಿರನೊಳಗೆ ಕಳೆಯಿರಬಹುದು

ಚಂದಿರನೆ ಕಲೆಯಾದರೆ?

ಬ್ರಹ್ಮ ತಳಮಳಿಸಿದ

ಇದೇನಿದು ತನ್ನಾಟ?

ಕೋಪವನ್ನು ಹೀಗೆ ತೋರಬಹುದೇ?

ಒಳಗೆ ಹಹರಿನ ಮೇಲಿದ್ದ

ದ್ವೇಷ ಅಸೂಯೆಗಳನ್ನಿಲ್ಲಿಇಟ್ಟೆನೆ

ನಾರಾಯಣಾ ಇದೇನಿದು ಆಟ

ಏನು ಮಾಡಲಿ ಭ್ರೂಣವನು

ಗೊಂದಲದಲಿ ವಿಧಾತಾ

ಕೈಬಿಟ್ಟ ಭೂಮಿಯೊಳಗೆ

ವಸುಧೆ ನಕ್ಕಳು

ಎಲ್ಲರೊಳು ಭ್ರೂಣ ಲೀನವಾಯ್ತು

No comments: