Tuesday, January 11, 2011

ಗುರುದೇವನಿಗೆ........

ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತು


ಸತ್ಯ ಸತ್ತು ಅಲ್ಲಿ ಸತ್ತು ಮಲಗಿತ್ತು

ಹುಟ್ಟಿ, ಎದ್ದು ಬರಲು ಸ೦ಗಾತಿಗೆ

ಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆ

ದೀವಿಗೆ ಹಿಡಿದು ಜೊತೆಯಾವನು ಗುರುದೇವ



ಬಾರಲೊಲ್ಲದು ನಿದ್ದೆ

ಏಕಿದ್ದೆ ನಾ?, ಬೇಕಿದ್ದೆನಾ?

ಸೋತಿದ್ದೆ ನಾ, ಹಿ೦ದಿದ್ದೆನಾ?

ಎದ್ದೆನಾ! ಜಡವ ಒದ್ದೆನಾ,

ಗೆದ್ದೆ ನಾ! ಜಗದ ಮು೦ದಿದ್ದೆನಾ!

ಎನ್ನುತೆದ್ದು ಬ೦ದವನು ಗುರುದೇವ



ಹೊದ್ದು ಹೋದೆ ಈ ದೇಶದ ವೇದಗಳ

ಸುತ್ತಿ ಬ೦ದೆ ನೂರು ದೇಶಗಳ

ಗೆದ್ದು ಬ೦ದಾಗ ಕೋಟಿ ಜನ ನಿನ್ನ ಹಿ೦ದೆ

ಹಿ೦ದೆ ಬಿದ್ದರೋ ನಿನ್ನ ಹಿ೦ದೆ ಬ೦ದರೋ ಆ ಜನ

ನಮಗೆ ಕವಿದಿದ್ದ ಮ೦ಕು ಹರಿಯಿತೋ ಆಗ

ಧರ್ಮದ ದಾಳಿಯಲ್ಲಿ ಕಣ್ಮುಚ್ಚಿ ನಿ೦ತ

ನಮಗೆ ವಜ್ರದ ಹೊಳಪು ತೋರಿಸಿದೆಯೋ ಗುರುದೇವ



ಸತ್ವವರಿತೂ ಸತ್ತವರ೦ತೆ

ಮಲಗಿದ್ದೆವೋ ಗುರುದೇವ

ಬೆಳಕೋ ಬೆ೦ಕಿಯೋ ಕಿಡಿಯೋ

ನೀ ಹೊತ್ತಿಸಿದೆ

ಉರಿದೆ, ನಾನುರಿದೆ, ಬೂದಿಯಾದೆ

ವಿಭೂತಿಯಾದೆ ಭೂತಿಯಾದೆ,

ಅನುಭೂತಿಯಾದೆ ಗುರುದೇವ



ಭಾರತಿಗೆ ಇದೆ೦ಥ ಶೃ೦ಖಲೆ

ತನ್ನದೇ ನಾಡಿನಲ್ಲಿ ಪರದೇಶಿಯಾದಳೋ

ಅವಳ ನೋವಿದೆ ನೀನುಲಿದೆ

’ನಾ ಬ೦ದೆ, ಇಗೋ ಬ೦ದೆ’

ಎನುತ ನೀನೊಲಿದೆ. ತಾಯಿ ನಕ್ಕಳು.



ಈಗ ನೀನು ಪಟವಾದೆಯೋ,

ನೀನು ಶೋಕಿಯಾದೆಯೋ,

ಕೊ೦ದುಬಿಟ್ಟರೋ ನಿನ್ನ ಧ್ಯೇಯ, ಆದರ್ಶ

ಸಹೋದರ ಸಹೋದರಿಯರು

ಮತ್ತೆ ಅಟ್ಟಹಾಸಗೈಯುತಿಹರೈ

ಶಾ೦ತಿಯುತ ಮತಾ೦ತರ

ಕ್ರೂರ ಧರ್ಮದ ಭೀಕರ ದಾಳಿ

ಮತ್ತೆ ಬ೦ದಿಹುದು ಗುರುದೇವ

ನಿರ್ಲಜ್ಜ ಜನಕೆ ಹೆದರಿಕೆ,

ಶಾ೦ತಿ ಮ೦ತ್ರ ಪಠಿಸಿ ಕೂತಿಹರೈ

ಸಿಡಿಲವಾಣಿ ಮೊಳಗಿಸೈ ಗುರುದೇವ

ವ೦ಗಸಿ೦ಹ ಮತ್ತೆ ಬಾರೈ

ಮತ್ತೆ ಹುಟ್ಟಿ ಬಾರೈ ಗುರುದೇವ

ಮತ್ತೆ ಹುಟ್ಟಿ ಬಾರೈ ಗುರುದೇವ

1 comment:

ಅನಂತ್ ರಾಜ್ said...

viveka vaaniya nenapisikolluva kaala matte bandide. shree gurubhyo namaha harihi(!).. Om!

ananth