Thursday, November 3, 2011

ಬಾಳ್ಗೆ ವಸ೦ತಾಗಮನ

ಏಕಾಕಿತನಕಿನ್ನು ವಿರಹವೇ ಗತಿಯಾಯ್ತು


ಅವಳರಳು ನಗೆಗೆ ತಾನಸೂಯೆಯನುಭವಿಸುತ

ಓಡಿದುದು ಏಕಾ೦ತ.



ಕವಿಯ ಕಣ್ಣಿನ ಏಕಾ೦ತಸಖಿ

.ಅದ್ವಿತೀಯಪ್ಪುಗೆಗೆ ನರಳಿ ಮತ್ತುರುಳಿ

ಕವಿತೆಯರಳಿ ಗ೦ಧವಿಲ್ಲದ ಸುಮದ೦ತೆ

ಅರಳಿ ನಿ೦ತಾಗ ಹೊರ ಹೊಮ್ಮಿದುದು

ದುಃಖಾ೦ತ ಕವಿತೆ. ಭಾವವೇ ಮೈದು೦ಬಿ

ಅಳುತ್ತಳುತ್ತ ನಿ೦ತ ಕವಿತೆ

ಓದುಗನ ಕಣ್ಣೊಳಗೆ ನೀರಿಳಿಸಿತ೦ತೆ



ಈಗ ಕವಿಬಾಳ್ಗೆ ವಸ೦ತಾಗಮನ

ತೊನೆ ತೊನೆದು ನಿ೦ತ ಚಿಗುರು

ಸಾರ ಹೀರಲು ಕಾದಿಹ ಬೇರು

ಒಣಕೊ೦ಬೆಯದು ಮುರಿದುಬಿತ್ತೋ!

ಕವಿಗೆ ಕಣ್ಣಿನ ಕವಿತೆಯೊಳಗೆ

ಹೂ ಹಣ್ಣು. ಓದುಗನ ಮನದೊಳಗೆ

ಜೀವದೊಲುಮೆಯ ಕಣ್ಣು

ಸಹವರ್ತಿ ಸಮಧಾತ್ರಿ ಸುಮಮೂರ್ತಿ

ಮೃದುಲ ಮಿಥಿಲಾ ಸ್ಪೂರ್ತಿ

No comments: