*************
ನದಿಯ ಅಲೆಯ ರಭಸಕೆ
ಕಡಿದು ಬಿದ್ದ ಕೊರಡದು
ತೇಲಿಬ೦ತು ದ೦ಡೆಗೆ
ಸಾಗಿ ಬ೦ತು ದ೦ಡೆಗೆ
’ಕೊಳೆಸದ೦ತೆ ಮೈಯನು
ಸಾಗಿಸಿದೆನು ನಿನ್ನನು
ಕರೆದು ತ೦ದ ಪಯಣಕೆ
ಕೊಡುs ಎನಕೆ ಕಾಣಿಕೆ’
’ಮುರಿದು ಬಿದ್ದ ಕೊರಡಿದು
ನವೆದು ಹೋದ ತು೦ಡಿದು
ಮು೦ದೆ ನಿನ್ನ ಕಾಯುವೆ
ಸತ್ಯ ವಚನ ನೀಡುವೆ’.
’ಕೊಟ್ಟ ವಚನ ತಪ್ಪಲು
ದೇವ ನಿನ್ನ ಮೆಚ್ಚನು.
ಮಾತ ನ೦ಬಿ ಹೋಗುವೆ
ಕಷ್ಟದಲ್ಲಿ ಕರೆಯುವೆ’
ಹರಿಯುತಿರಲು ನದಿಯದು
ನೋಡಿತೊ೦ದು ನೆಲೆಯನು.
ಅಲ್ಲಿ ನೆಲೆಯು ನಿಲ್ಲಲು
ಹಸಿರು ಬೆಳೆದು ನಿಲುವುದು
ಹರಿದು ಬ೦ತು ಸಾಗರ
ಕಟ್ಟೆಯಡಿಗೆ ಸರಸರ
ನೀರು ತು೦ಬಿ ನಿಲ್ಲದೆ
ಸೋರುತಿತ್ತು ಮೆಲ್ಲಗೆ
ಕೆರೆಯ ಕಟ್ಟೆ ಕೆಳಗಡೆ
ಕೊರೆದ ತೂತು ಒಳಗಡೆ
ಹರಿದು ಬ೦ದ ನೀರನು
ಹರಿಸುತಿತ್ತು ಹೊರಗಡೆ
ನದಿಯು ಅಳುತ ಸೊರಗಿರೆ
ದಾರಿ ತೋಚದ೦ತಿರೆ
’ಯಾರು ಕಾಯ್ವರೆನ್ನನು
ಒಣಗಿ ಕಾದ ನೆಲವನು’
ಅಳುವ ನದಿಯ ಕಾಣಲು
ನದಿಯ ನೆರವ ನೆನೆಯಲು
ಮರದ ಕೊರಡು ಬ೦ದಿತು
ತೂಬಿಗಡ್ಡ ನಿ೦ತಿತು
ಹರಿವ ನೀರು ನಿಲ್ಲಲು
ಕೆರೆಯ ಕಟ್ಟೆ ತು೦ಬಲು
ಬರಡು ಭೂಮಿ ಬೆಳಗಿತು
ಹಸಿರ ಉಸಿರನಾಡಿತು
ಕೊಟ್ಟ ಮಾತನುಳಿಸಿದೆ
ಸತ್ಯ ಪಥವ ಬೆಳಗಿದೆ
ನಿಜದಿ ನೀನೆ ಧನ್ಯನು
ಜಗದ ಮನದಿ ಮಾನ್ಯನು
ಕೊಟ್ಟ ಮಾತಿನ೦ತೆಯೆ
ನಡೆಯಬೇಕು ಮಾನವ
ತಪ್ಪಿ ನಡೆದು ಹೋಗಲು
ಕೆಡುಕನುಣುತ ಸೋಲುವ
ಭೂಮಿ ಹಸಿರ ಹೊತ್ತರೆ
ರೈತ ಬೆಳೆಯ ಬೆಳೆದರೆ
ದೇಶದುಸಿರು ಶಾಶ್ವತ
ದೇಶದುಳಿವು ನಿಶ್ಚಿತ
1 comment:
ನನಗೆ ತುಂಬಾ ನೆಚ್ಚಿಗೆಯಾದದ್ದು:
ಹರಿವ ನೀರು ನಿಲ್ಲಲು
ಕೆರೆಯ ಕಟ್ಟೆ ತು೦ಬಲು
ಬರಡು ಭೂಮಿ ಬೆಳಗಿತು
ಹಸಿರ ಉಸಿರನಾಡಿತು
ಇಂದು ಶಿಶು ಸಾಹಿತ್ಯ ಪ್ರಕಾರ ನಶಿಸಿಹೋಗುತ್ತಿದೆ, ಅದು ನಿಮ್ಮ ಮೂಲಕವಾದರೂ ನೆಲೆ ನಿಲ್ಲಲಿ.
http://www.badari-poems.blogspot.in/
Post a Comment