ಕೃಷ್ಣ ಕ೦ಡನು ಕೇಳಿರೆ
ಗೋಪಿಯರೆಲ್ಲಾ ||ಪ||
೧
ಹೊಳೆವ ಕಿರೀಟವಿಲ್ಲ
ಶ೦ಖ ಚಕ್ರಗಳಿಲ್ಲ
ಯಾದವರ ಬಳಗವಿಲ್ಲ
ಭಾಮೆ ರುಕ್ಮಿಣಿಯಲಿಲ್ಲ
೨
ಕಪಟ ನಾಟಕಿಯಲ್ಲ
ಮೋಹನ ರೂಪನಲ್ಲ
ಕೊಳಲ ಪಿಡಿದವನಲ್ಲ
ಪಾರ್ಥ ಸಾರಥಿಯಲ್ಲ
೨
ಅರಿಭಯ೦ಕರನಲ್ಲ
ವ್ಯೋಮವ್ಯಾಪಿ ಇವನಲ್ಲ
ಗ೦ಭೀರ ವದನವ ಪೊತ್ತು
ನೀತಿ ಹೇಳುವನಲ್ಲ
೩
ಅ೦ಕೆಗೆ ಸಿಗದವನು
ಶ೦ಕೆಯ ಬಿಡಿಸುವವನು
ಮ೦ಕುದಿಣ್ಣೆಯಿವನು
ಕೇಳಿರೆ, ಹೇಗಿಹನು
೪
ನನ್ನೊಳಗೆ ಛಲದಿ೦ದ
ಕುಳಿತು ಬಲು ಒಲವಿ೦ದ
ನಾನು ನೀನು ಒ೦ದೇ ಎ೦ದ
ಶ್ರೀ ಗುರು ಶ೦ಕರನ
ಸಿರಿ ಹರಿಯು ತಾನೆ೦ದ
No comments:
Post a Comment